ಈ ಸಂಗ್ರಹದ ಕಥೆಗಳು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಬಹು ಕಾಲದ ಹಿಂದಿನಿಂದ ಆಗಾಗ್ಗೆ ಪ್ರಕಟವಾದವು. ಈ ಕಥೆಗಳು ತಮ್ಮದೇ ಆದ ಒಂದು ವ್ಯಕ್ತಿತ್ವದಿಂದ ಕೂಡಿವೆಯೆಂಬುದನ್ನು ಓದುಗರು ಮನಗಾಣದಿರಲಾರರು. ಜೀವನದ ಕಷ್ಟಕಾರ್ಪಣ್ಯಗಳು ಕಥೆಗಾರರ ಮನಸ್ಸನ್ನು ಕರಗಿಸಿವೆ. ಬಹುಶಃ ಇಲ್ಲಿನ ಕಥೆಗಳಲ್ಲೆಲ್ಲ ಒಂದಲ್ಲ ಒಂದು ರೀತಿಯ ಕ್ಲೇಶದಿಂದ ಕೂಡಿರುವ ಸನ್ನಿವೇಶಗಳನ್ನು ಕಾಣಬಹುದು. ಜೀವನದಲ್ಲಿ ಕ್ಲೇಶ ಇರಬೇಕೇ? ಅದು ಅಪರಿಹಾರ್ಯವಲ್ಲವೆ? ಅದರ ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ಸಮಾಧಾನವನ್ನು ಕಥೆಗಳಲ್ಲಿ ಅರಸಬಹುದು. ಮುನ್ನುಡಿಯಲ್ಲಿಯೂ ಅದರ ವಿವರಣೆಯನ್ನು ನೋಡಬಹುದು. ಸಂಕಟದ ತೀಕ್ಷ್ಣತೆಯನ್ನು ಮರೆಸದಿದ್ದರೂ ಸೌಮ್ಯಗೊಳಿಸುವ ಒಂದು ಸಹಜ ಹಾಸ್ಯದ ಸೂತ್ರ ಈ ಕಥೆಗಳಲ್ಲಿದೆ.
ಈ ಸಂಗ್ರಹದ ಕಥೆಗಳು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಬಹು ಕಾಲದ ಹಿಂದಿನಿಂದ ಆಗಾಗ್ಗೆ ಪ್ರಕಟವಾದವು. ಈ ಕಥೆಗಳು ತಮ್ಮದೇ ಆದ ಒಂದು ವ್ಯಕ್ತಿತ್ವದಿಂದ ಕೂಡಿವೆಯೆಂಬುದನ್ನು ಓದುಗರು ಮನಗಾಣದಿರಲಾರರು. ಜೀವನದ ಕಷ್ಟಕಾರ್ಪಣ್ಯಗಳು ಕಥೆಗಾರರ ಮನಸ್ಸನ್ನು ಕರಗಿಸಿವೆ. ಬಹುಶಃ ಇಲ್ಲಿನ ಕಥೆಗಳಲ್ಲೆಲ್ಲ ಒಂದಲ್ಲ ಒಂದು ರೀತಿಯ ಕ್ಲೇಶದಿಂದ ಕೂಡಿರುವ ಸನ್ನಿವೇಶಗಳನ್ನು ಕಾಣಬಹುದು. ಜೀವನದಲ್ಲಿ ಕ್ಲೇಶ ಇರಬೇಕೇ? ಅದು ಅಪರಿಹಾರ್ಯವಲ್ಲವೆ? ಅದರ ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ಸಮಾಧಾನವನ್ನು ಕಥೆಗಳಲ್ಲಿ ಅರಸಬಹುದು. ಮುನ್ನುಡಿಯಲ್ಲಿಯೂ ಅದರ ವಿವರಣೆಯನ್ನು ನೋಡಬಹುದು. ಸಂಕಟದ ತೀಕ್ಷ್ಣತೆಯನ್ನು ಮರೆಸದಿದ್ದರೂ ಸೌಮ್ಯಗೊಳಿಸುವ ಒಂದು ಸಹಜ ಹಾಸ್ಯದ ಸೂತ್ರ ಈ ಕಥೆಗಳಲ್ಲಿದೆ.